ಇತಿಹಾಸದಲ್ಲಿ ಬರುವ ಕರ್ನಾಟಕ ಆಳಿದ ಮೊಟ್ಟಮೊದಲ ರಾಜಮನೆತನವೆಂದರೆ ಶಾತವಾಹನರು. ಶಾತವಾಹನರ ಸಂಸ್ಥಾಪಕ ಅರಸ ಸಿಮುಖ. ಶಾತವಾಹನರ ಕಾಲ ಕ್ರಿ. ಪೂ. 235 ರಿಂದ ಕ್ರಿ. ಶ. 225 ರ ವರೆಗೆ. ಇವರ ರಾಜಧಾನಿ ಪೈಠಾಣ ಅಥವಾ ಪ್ರತಿಷ್ಠಾನವಾಗಿತ್ತು. ಈ ಶಾತವಾಹನರ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಾಗಿ ಕೇಳುತ್ತಾರೆ. ಈ ಕಾರಣದಿಂದ ನಾವು ಶಾತವಾಹನರ ಕೆಲವೊಂದು ಮಾಹಿತಿ ನಿಮಗೆ ಹಂಚಿದ್ದೇವೆ.
- ಶಾತವಾಹನರ ಸ್ಥಾಪಕ- ಸಿಮುಖ
- ಶಾತವಾಹನರ ರಾಜ್ಯ ಲಾಂಛನ- ವರುಣ
- ಸಿಮುಖನ ರಾಜಧಾನಿ – ಶ್ರೀಕಾಕುಳಂ
- ಶಾತವಾಹನರ ರಾಜಧಾನಿ- ಪೈಠಾಣ ಅಥವಾ ಪ್ರತಿಷ್ಠಾನ
- ದಕ್ಷಿಣ ಭಾರತದಲ್ಲಿ ಸ್ಥಾಪನೆಯಾದ ಪ್ರಥಮ ಸಾಮ್ರಾಜ್ಯ- ಶಾತವಾಹನ