ರಾಜ್ಯದ ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೂ ಬರುವ ಮುಂಚೆಯೇ ಸೂಚಿಸಿದ್ದ ಎಲ್ಲಾ ಐದು ಭರವಸೆಗಳನ್ನು ಕೂಡ ರಾಜ್ಯದ ಜನರಿಗೆ ನೀಡಲು ಮುಂದಾಗಿದ್ದು ಗೃಹಣಿಯರಿಗೆ ಪ್ರತಿ ತಿಂಗಳು 2000 ಹಣವನ್ನು ಜಾರಿ ಮಾಡಿದ್ದಾರೆ ಗೃಹಿಣಿಯರು 2000 ಹಣಕ್ಕಾಗಿ ಅರ್ಜಿ ಸಲ್ಲಿಸಲು ಈ ಮುಖ್ಯ ದಾಖಲಾತಿಗಳು ಇರಲೇಬೇಕು ಇಲ್ಲವಾದಲ್ಲಿ ಗೃಹಣಿಯರಿಗೆ ಈ ಯೋಜನೆಯ ಫಲ ಸಿಗುವುದಿಲ್ಲ ಹಾಗಾಗಿ ಲೇಖನವನ್ನು ಪೂರ್ತಿ ಓದಿ ಈ ದಾಖಲಾತಿಗಳು ತಪ್ಪದೆ ನಿಮ್ಮ ಬಳಿ ಇದೆಯಾ ಇಲ್ಲವಾ ಎಂದು ಪರಿಶೀಲಿಸಿಕೊಳ್ಳಿ.
ಎಲ್ಲಾ ಗೃಹಿಣಿಯರಿಗೆ ಸಿಗಲಿದೆ 2000 ಪ್ರತಿ ತಿಂಗಳು.
ಈ ಯೋಜನೆಯ ಅಡಿಯಲ್ಲಿ ಕೇವಲ ಕರ್ನಾಟಕದ ಕಾಯಂ ನಿವಾಸಿಯಾಗಿರುವ ಗೃಹಿಣಿಯರಿಗೆ ಮಾತ್ರ ಉಚಿತ ಎರಡು ಸಾವಿರ ಹಣವನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ. ಒಂದು ವೇಳೆ ನೀವೇನಾದರೂ ಕರ್ನಾಟಕದ ಕಾಯಂ ನಿವಾಸಿ ಆಗದೆ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದಿದ್ದಲ್ಲಿ ನಿಮಗೆ ಈ ಯೋಜನೆಯ ಫಲವು ಸಿಗುವುದಿಲ್ಲ.
ಗೃಹಿಣಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಲು
1.ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
2.ಗೃಹಿಣೀಯ ಬಳಿಯಲ್ಲಿ ಆಧಾರ್ ಕಾರ್ಡ್ ಇದ್ದು ಆಧಾರ್ ನೊಂದಿಗೆ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಲಿಂಕ್ ಆಗಿರಬೇಕು ಇಲ್ಲವಾದಲ್ಲಿ ಗೃಹಿಣಿಯ ಖಾತೆಗೆ 2000 ಹಣವು ಜಮವಾಗುವುದಿಲ್ಲ.
ಸರ್ಕಾರವು ಮುಂಚೆಯೂ ಕೂಡ ಎನ್ಪಿಸಿಐನ NPCI ಮೂಲಕ ಅಂದರೆ ರೈತರಿಗೆ ಅಥವಾ ಬಡವರಿಗೆ ಸಿಗುವ ಎಲ್ಲಾ ಹಣವನ್ನು ಕೂಡ ನೇರವಾಗಿ ಅವರ ಆಧಾರ್ ಮೂಲಕವೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಮುಂದಾಗಿದ್ದು, ನಿಮ್ಮ ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಇದನ್ನು ನಾವು ಡಿ ಬಿ ಟಿ DBT ಎಂದು ಕೂಡ ಕರೆಯುತ್ತೇವೆ,. ಡಿ ಬಿ ಟಿ ಎಂದರೆ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್ ಎಂದು ಇದರ ಮೂಲಕ ಫಲಾನುಭವಿಯ ಆಧಾರ್ ಕಾರ್ಡ್ ಬಳಸಿಕೊಂಡು ನೇರವಾಗಿ ಫಲಾನುಭವಿಯ ಆಧಾರ್ ಕಾಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಇದರಿಂದ ಫಲಾನುಭವಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳು ನೇರವಾಗಿ ತನ್ನ ಬ್ಯಾಂಕ್ ಖಾತೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತಂದಿದ್ದು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಇಲ್ಲವಾ ಎಂದು ಈಗಲೇ ಪರಿಶೀಲಿಸಿಕೊಳ್ಳಿ,
ಒಂದು ವೇಳೆ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳು ಇದ್ದಲ್ಲಿ ಯಾವುದಾದರೂ ಒಂದು ಬ್ಯಾಂಕ್ ಖಾತೆಗೆ ಮಾತ್ರವೇ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ ಈ ಕುರಿತು ನೀವು ಆಧಾರ್ ಕಾರ್ಡ್ ನ ಅಫೀಸಿಯಲ್ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಸ್ಟೇಟಸ್ ಒಂದನ್ನು ಆಧಾರ್ ನಂಬರ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ಎಂಟರ್ ಮಾಡುವ ಮೂಲಕ ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದು. ಒಂದು ವೇಳೆ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲದೆ ಇದ್ದಲ್ಲಿ ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ವಿಸಿಟ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ನೀವು ಆಧಾರ್ ಕಾರ್ಡನ್ನು ಲಿಂಕ್ ಮಾಡಿಸುವುದು ಸೂಕ್ತ.
ಗೃಹಿಣೀರು 2000 ಹಣ ಪಡೆಯಲು ಈ ಕಾರ್ಡ್ ಕಡ್ಡಾಯ!
ಹೌದು ನೀವು ಕೂಡ ಕರ್ನಾಟಕದ ಗೃಹಿಣೀಯರಾಗಿದ್ದಲ್ಲಿ ಸರ್ಕಾರದ ವತಿಯಿಂದ ನಿಮಗೂ ಕೂಡ ಪ್ರತಿ ತಿಂಗಳು 2000 ಹಣ ಸಿಗಲಿದೆ ಆದರೆ ನಿಮ್ಮ ಬಳಿ ಈ ಕಾರ್ಡ್ ಕಡ್ಡಾಯವಾಗಿ ಇರಬೇಕು ಅದೇನೆಂದರೆ ಬಿಪಿಎಲ್ ರೇಷನ್ ಕಾರ್ಡ್(BPL RATION CARD ) ಕಡ್ಡಾಯವಾಗಿ ನಿಮ್ಮ ಬಳಿ ಇರಬೇಕು ಇಲ್ಲವಾದಲ್ಲಿ ನಿಮಗೆ ಸರ್ಕಾರದ ವತಿಯಿಂದ ಸಿಗುವ 2000 ಹಣ ಸಿಗುವುದಿಲ್ಲ ಯಾಕೆಂದರೆ ಈ ಯೋಜನೆಯ ಮುಖ್ಯ ಉದ್ದೇಶ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಮತ್ತು ಬಡ ಮಧ್ಯಮ ವರ್ಗದವರಿಗೆ ಮಾತ್ರವೇ ಹಣವನ್ನು ವಿತರಣೆ ಮಾಡಲು ಮುಂದಾಗಿದ್ದು ಎಪಿಎಲ್ ರೇಷನ್ ಕಾರ್ಡನ್ನು ಕೇವಲ ಮಧ್ಯಮ ವರ್ಗದಿಂದ ಮೇಲ್ಪಟ್ಟವರಿಗೆ ಮಾತ್ರವೇ ನೀಡಲಾಗುತ್ತದೆ ಅದೇ ಬಡವರಿಗೆ ಮಾತ್ರವೇ ಬಿಪಿಎಲ್ ರೇಷನ್ ಕಾರ್ಡ್ ನೀಡುವ ಕಾರಣ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದಲ್ಲಿ ಮಾತ್ರವೇ ನಿಮಗೆ ಸರ್ಕಾರದಿಂದ ಸಿಗುವ 2000 ಹಣ ಸಿಗಲಿದೆ.
ಆನ್ಲೈನ್ ನ ಮೂಲಕ ಗೃಹಿಣಿಯರು ಅರ್ಜಿ ಸಲ್ಲಿಸುವುದು ಹೇಗೆ!
ಸದ್ಯ ಈ ಕುರಿತು ಇದಾಗಲೇ ನಮ್ಮ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಎಲ್ಲಾ ಗೃಹಿಣಿಯರ ಖಾತೆಗೆ ಉಚಿತವಾಗಿ 2000 ಹಣವನ್ನು ನೀಡುವುದಾಗಿ ಘೋಷಿಸಿದ್ದಾರೆ ಆದರೆ ಈ ಕುರಿತು ಇನ್ನೂ ಕೂಡ ಯಾವುದೇ ಅಧಿಕೃತ ವೆಬ್ಸೈಟ್ ಮತ್ತು ಅಧಿಕೃತ ಆದೇಶ ಹೊರಡಿಸಿಲ್ಲ ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ಒಂದರಲ್ಲಿ ಈ ಕುರಿತು ಚರ್ಚಿಸಿ ಇದಕ್ಕೆ ಬೇಕಾದ ಎಲ್ಲಾ ಆದೇಶವನ್ನು ಹೊರಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನ ಬಳಿಕ ಗೃಹಿಣಿಯರು ತಮ್ಮ ಊರಿನ ಪಂಚಾಯಿತಿ ಅಥವಾ ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡಬ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ಮೂಲಕ ಕೂಡ ಅರ್ಜಿ ನೊಂದಣಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲ ಮುಖ್ಯ ದಾಖಲಾತಿಗಳು ನಿಮ್ಮ ಬಳಿ ಇದೆಯಾ ಇಲ್ಲವಾ ಎಂದು ಪರಿಶೀಲಿಸಿಕೊಳ್ಳಿ ಒಂದು ವೇಳೆ ಇಲ್ಲವಾದಲ್ಲಿ ಈ ಕೂಡಲೇ ಎಲ್ಲಾ ಮುಖ್ಯ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಿ ಬಳಿಕ ಮುಂದಿನ ವಾರ ನೀವು ಅರ್ಜಿ ಸಲ್ಲಿಸಲು ಉಪಯುಕ್ತವಾಗುತ್ತದೆ.